Tuesday, March 13, 2012

ಹೊಸ ಲುಕ್‌... ಹೊಸ ಗೆಟಪ್‌....

ಸಚಿನ್ 99ನೇ ಶತಕ ದಾಖಲಿಸಿ ಒಂದು ವರ್ಷ ಕಳೆದಿದೆ. 2011ರ ಮಾರ್ಚ್‌ 12ರಂದು ದಕ್ಷಿಣ ಆಫ್ರಿಕಾ ವಿರುದ್ಧ 111 ರನ್‌ ದಾಖಲಿಸಿದ ನಂತ್ರ ಸಚಿನ್ ಆಗಸವನ್ನ ದಿಟ್ಟಿಸಿ ನೋಡಿಲ್ಲ. ಅಭಿಮಾನಿಗಳತ್ತ ಬ್ಯಾಟ್‌ ಬೀಸಿ ಶತಕದ ಸಂಭ್ರಮವನ್ನ ಆಚರಿಸಿಕೊಂಡಿಲ್ಲ. ಮಹಾ ಶತಕವಂತೂ ಮರೀಚಿಕೆಯಾಗಿಬಿಟ್ಟಿದೆ. ಕ್ರಿಕೆಟ್‌ ಅಭಿಮಾನಿಗಳು ಹಾಗೂ ಕ್ರಿಕೆಟ್‌ ಪಂಡಿತರು ಮಾಡುವ ಟೀಕೆಗಳು ಅಷ್ಟಿಷ್ಟಲ್ಲ. ಇದ್ರಿಂದ ಸಚಿನ್‌ ಕೂಡ ಬೇಸೆತ್ತು ಹೋಗಿದ್ದಾರೆ.
ಹೌದು, 99 ಶತಕ ದಾಖಲಿಸಿರುವ ಸಚಿನ್‌ಗೆ ಒಂದು ಶತಕ ದಾಖಲಿಸಲು ಸಾಧ್ಯವಿಲ್ವಾ.. 23 ವರ್ಷಗಳ ಅನುಭವ ಎಲ್ಲಿಗೆ ಹೋಯ್ತು... ಮಾಸ್ಟರ್‌ ಅಷ್ಟೊಂದು ಟೆನ್ಷನ್‌ ಆಗಿಬಿಟ್ಟಿದ್ದಾರಾ... ಸಚಿನ್‌ಗೇ ಏನಾಗಿದೆ... ವಯಸ್ಸು ಅಡ್ಡಿಯಾಗುತ್ತಿದೆಯಾ...ಫಿಟ್‌ ನೆಸ್‌ ಇಲ್ವಾ.. ಬ್ಯಾಟಿಂಗ್ ಶಕ್ತಿಯನ್ನ ಕಳೆದುಕೊಂಡಿದ್ದಾರಾ... . ಛೇ...ಛೇ.. ಕ್ರಿಕೆಟ್‌ ಮಾಸ್ಟರ್‌ಗೆ ಹಿಂಗೆಲ್ಲಾ ಆಗುತ್ತಾ... ನಂಬುವುದು ತುಸು ಕಷ್ಟ...
ಅದೇನೇ ಇರಲಿ... ಸಚಿನ್ ಶತಕಕ್ಕಾಗಿ 12 ತಿಂಗಳ ಅಜ್ಞಾತವಾಸ ಮುಗಿಸಿದ್ದಾರೆ. 366ನೇ ದಿನ ಮೀರ್‌ಪುರ್‌ನಲ್ಲಿ ಸಚಿನ್ ತೆಂಡುಲ್ಕರ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶತಕದ ಗ್ರಹಣದಿಂದ ಹೊರಬರಲು ವಾಮನಮೂರ್ತಿ ತನ್ನ ಹೇರ್‌ಸ್ಟೈಲ್‌ ಅನ್ನೇ ಚೇಂಚ್‌ ಮಾಡ್ಕೊಂಡಿದ್ದಾರೆ. ಹೌದು, ತಲೆ ಕೂದಲಿಗೆ ಕಲರ್‌ ಹಾಕೊಂಡು, ಹಿಂದುಗಡೆ ಚಿಕ್ಕ ಜುಟ್ಟು ಹಾಕೊಂಡ ಮಾಸ್ಟರ್‌ ಡಿಫರೆಂಟ್‌ ಲುಕ್‌ನಲ್ಲಿದ್ರು. .
ಆದ್ರೂ, ಸಚಿನ್ ಶತಕದ ಗ್ರಹಣದಿಂದ ಹೊರಬರಲಿಲ್ಲ. ಹೊಸ ಗೆಟಪ್‌ನಲ್ಲಿ ಅಂಗಣಕ್ಕಿಳಿದ್ರೂ ಸಚಿನ್‌ ಮಾತ್ರ ಅಭಿಮಾನಿಗಳಿಗೆ ಮತ್ತೆ ನಿರಾಸೆ ಮೂಡಿಸಿದ್ರು. ಅಷ್ಟೇ ಅಲ್ಲ, ಸಚಿನ್‌ ಬ್ಯಾಟಿಂಗ್‌ ವೈಖರಿಯಲ್ಲಿ ಈ ಹಿಂದಿನಂತೆ ಗತ್ತು ಇರಲಿಲ್ಲ.. ಧಮ್ಮ್‌ ಇರಲಿಲ್ಲ.. ಯಾಕೋ ಅಳುಕಿನಿಂದಲೇ ಬ್ಯಾಟ್‌ ಮಾಡಿದಂತಿತ್ತು. ಜತೆಗೆ ಫುಲ್‌ಟಾಸ್‌ ಎಸೆತಕ್ಕೆ ಔಟಾದ ರೀತಿ ಕೂಡ ಅಚ್ಚರಿಯೂ ಆಗುತ್ತಿದೆ.
ಇನ್ನು, ಸಚಿನ್‌ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ ಅಂತ ತುಂಬಾನೇ ರೋಸಿ ಹೋಗಿದ್ದಾರೆ. ಯಾವಾಗಲೂ ಔಟ್‌ ಅದ ತಕ್ಷಣ ಅಂಪೈರ್‌ ತೀರ್ಮಾನಕ್ಕೂ ಕಾಯದೇ ಪೆವಿಲಿಯನ್‌ಗೆ ಹಿಂತಿರುಗುತ್ತಿದ್ರು. ಆದ್ರೆ ಮಿರ್‌ಪುರ್‌ನಲ್ಲಿ ಸಚಿನ್ ಹಾಗೇ ಮಾಡಲಿಲ್ಲ. ಲಕ್ಮಲ್‌ ಅವ್ರ ಎಸೆತದಲ್ಲಿ ಜಯವರ್ಧನೆ ಕ್ಯಾಚ್‌ ಹಿಡಿದಾಗ ಸಚಿನ್‌ಗೆ ಯಾಕೋ ಅನುಮಾನ ಬಂದುಬಿಟ್ಟಿತ್ತು. ಇದ್ರಿಂದ ಮಾಸ್ಟರ್‌ ಥರ್ಡ್‌ ಅಂಪೈರ್‌ಗೆ ಮನವಿ ಸಲ್ಲಿಸಿದ್ರು. ಆದ್ರೂ ಏನೂ ಪ್ರಯೋಜನವಾಗಲಿಲ್ಲ. ಸಚಿನ್ ನಿರಾಸೆಯಿಂದಲೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು..
ಇದ್ರಿಂದಲೇ ತಿಳಿಯುತ್ತೆ...ಸಚಿನ್ ಒತ್ತಡಕ್ಕೆ ಸಿಲುಕಿದ್ದಾರೆ. ನೂರನೇ ಶತಕ ಅವ್ರನ್ನ ಬೆಂಬಿಡದೇ ಕಾಡುತ್ತಿದೆ. ಹೇಗಾದ್ರೂ ಮಾಡಿ ಶತಕ ದಾಖಲಿಸಿ ಎಲ್ಲಾ ಒತ್ತಡಗಳಿಂದ ಹೊರಬರಬೇಕು ಅನ್ನೋ ಹಂಬಲದಲ್ಲಿದ್ದಾರೆ. ಆದ್ರೆ ಯಾಕೋ ಕಾಲ ಕೂಡಿ ಬರ್ತಿಲ್ಲ. ಒಟ್ಟಾರೆ, ಸಚಿನ್‌ ಬಗ್ಗೆ ಏನು ಬೇಕಾದ್ರೂ ಮಾತಾಡಬಹುದು... ಶತಕ ಸಿಡಿಸಿಲ್ಲ. ಆಡಲು ಆಗುತ್ತಿಲ್ಲ...ಆಡಿದ್ದು ಸಾಕು... ವಿದಾಯ ಹೇಳಬೇಕು... ಹೀಗೆ ಮಾತನಾಡೋರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಆದ್ರೆ ತಾನು ಯಾವಾಗ ನಿವೃತ್ತಿಯಾಗಬೇಕು ಎಂಬುದನ್ನ ಸಚಿನ್‌ ಡಿಸೈಡ್‌ ಮಾಡ್ತಾರೆ.. ಅಲ್ಲಿಯ ತನಕ ಕಾಯಲೇಬೇಕು... ಯಾಕಂದ್ರೆ ಇದು ದೇವ್ರ ಆಟ..
ಸನತ್‌ ರೈ