ಪದೇ ಪದೇ ನೆನಪಾಗುವ ಆ ಮುಸ್ಸಂಜೆಯ ಕ್ಷಣಗಳನ್ನು ಮರಿಬೇಕು ಅಂದ್ರೂ ಮರೆಯೋಕೆ ಆಗ್ತಾ ಇಲ್ಲ. ಕಡಲ ಕಿನಾರೆಯ ಮರಳಿನ ಮೇಲೆ ಮೌನವಾಗಿ ನಡೆದಾಡಿದ ಆ ಕ್ಷಣಗಳು ಮತ್ತೆ ಮತ್ತೆ ನೆನಪಾಗುತ್ತಿದೆ ಕಣೆ ....ಹುಚ್ಚು ಪ್ರೀತಿಯನ್ನು ಮರೆತು ಬದುಕು ಕಟ್ಟಿಕೊಂಡರು ನಿನ್ನನಂತು ಮರೆತರು ಮರೆಯೋಕೆ ಆಗ್ತಾ ಇಲ್ಲ. ಸ್ನೇಹ... ಪ್ರೀತಿಗೆ ತಿರುಗಿ ಅದು ಮುಂಗಾರು ಮಳೆಯಂತೆ ಅಂತ್ಯಗೊಳ್ಳುತ್ತೆ ಅಂತ ನೀನು ಅಂದುಕೊಂಡಿರಲಿಲ್ಲ .... ನಾನು ಅಂದುಕೊಂಡಿರಲಿಲ್ಲ ....ಇರಲಿ ಬದುಕು ಜಟಕಾ ಬಂಡಿ ಅಂತಾರಲ್ಲ ಹಂಗೆ ... ಕಳೆದು ಹೋದ ದಿನಗಳ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ಹಾಗಂತ ಗೊತ್ತಿದ್ರು ನಿನ್ನ ಆ ನಗುಮುಖ ನನ್ನ ಮನಸ್ಸನ್ನು ಮತ್ತೆ ಕಾಡುತ್ತಿದೆ...
No comments:
Post a Comment