Sunday, January 1, 2012

ಯಾರಿಗೆ ಭಾರತ ರತ್ನ

ಸಚಿನ್‌ ಮತ್ತು ಧ್ಯಾನ್‌ಚಾಂದ್‌ ... ಯಾರು ಶ್ರೇಷ್ಠರು ಅಂತ ಹೇಳುವುದರಲ್ಲಿ ಅರ್ಥವಿಲ್ಲ. ಕ್ರೀಡಾ ಜಗತ್ತಿನಲ್ಲಿ ಇಬ್ರೂ ಮಹಾನ್‌ ಸಾಧಕರು... ಮಾಡಿರುವ ಸಾಧನೆಗಳಿಗೆ ಬೆಲೆ ಕಟ್ಟಲಂತೂ ಸಾಧ್ಯನೇ ಇಲ್ಲ. ಆದ್ರೂ ಇಬ್ರೂ ಈಗ ಚರ್ಚೆಯ ಕೇಂದ್ರ ಬಿಂದುವಾಗಿದ್ದಾರೆ. ಕ್ರೀಡಾ ಸಾಧಕರ ಲೀಸ್ಟ್‌ ನಲ್ಲಿ ಭಾರತ ರತ್ನ ಪ್ರಶಸ್ತಿ ನೀಡುವುದಾದ್ರೆ ಯಾರಿಗೆ ಮೊದಲು ನೀಡಬೇಕು ಅನ್ನೋದು ದೊಡ್ಡ ಗೊಂದಲಕ್ಕೆ ಕಾರಣವಾಗುತ್ತಿದೆ.


ಹೌದು, ಧ್ಯಾನ್‌ ಚಾಂದ್‌ ಆಟವನ್ನ ನೋಡುವುದೇ ಚಂದ...ಅಂಗಣದಲ್ಲಿ ಮ್ಯಾಜಿಕ್‌ ಮಾಡುತ್ತಿದ್ದ ಧ್ಯಾನ್‌ಚಾಂದ್‌ ಎದುರಾಳಿ ಆಟಗಾರರನ್ನೇ ಬೆರಗುಗೊಳಿಸುತ್ತಿದ್ರು. ಅಂತಹ ಮಾಂತ್ರಿಕ ಶಕ್ತಿ ಧ್ಯಾನ್‌ ಚಾಂದ್‌ಗಿತ್ತು... ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ ಮನ್‌ ರನ್‌ ದಾಖಲಿಸುವ ಹಾಗೇ ಧ್ಯಾನ್‌ ಚಾಂದ್‌ ಹಾಕಿಯಲ್ಲಿ ಸಲೀಸಾಗಿ ಗೋಲು ದಾಖಲಿಸುತ್ತಿದ್ರು. flow…
ಇನ್ನು, ಸಚಿನ್‌ ತೆಂಡುಲ್ಕರ್‌.. ಹೇಳಬೇಕಾದ ಅಗತ್ಯವೇ ಇಲ್ಲ.. ಎಲ್ರಿಗೂ ಗೊತ್ತಿರುವ ಚಿರಪರಿಚಿತ ಹೆಸರು.. ಸೂಜಿಗಲ್ಲಿನಂತೆ ಆಕರ್ಷಿಸುವ ಸಚಿನ್ ಬ್ಯಾಟಿಂಗ್‌ ವಿಶ್ವ ಕ್ರಿಕೆಟನ್ನ ಚಕಿತಗೊಳಿಸಿದೆ. ಸುಮಾರು 23 ವರ್ಷಗಳಿಂದ ಕ್ರಿಕೆಟ್‌ ಜಗತ್ತನ್ನ ಆಳುತ್ತಿರುವ ತೆಂಡುಲ್ಕರ್‌ ಯುವ ಆಟಗಾರರಿಗೆ ಸ್ಪೂರ್ತಿಯ ಚಿಲುಮೆ... ಜಂಟಲ್‌ ಮ್ಯಾನ್‌ ಗೇಮ್‌ನ ಜಂಟಲ್‌ಮ್ಯಾನ್‌ ಆಟಗಾರನೂ ಹೌದು.

ನಿಜ, ಸಚಿನ್‌ ಸಾಧನೆಗೆ ಬಹುತೇಕ ಪ್ರಶಸ್ತಿಗಳು ಅವ್ರ ಹೆಸರಿನಲ್ಲಿ ಅಂಟಿಕೊಂಡಿವೆ. ಆದ್ರೆ ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿ ಭಾರತ ರತ್ನ ಗರಿ ಮಾತ್ರ ಇನ್ನೂ ಸೇರಿಕೊಂಡಿಲ್ಲ. ಇದಕ್ಕಾಗಿ ಕೆಲವೊಂದು ಅಡಚಣೆಗಳಿದ್ದವು. ಅದು ಈಗ ನಿವಾರಣೆಯಾಗಿದೆ. ಅಲ್ಲದೆ, ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ನೀಡಲೇಬೇಕು ಅನ್ನೊ ಕೂಗು ಜೋರಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿಯ ನೀತಿ ನಿಯಮಗಳನ್ನ ಬದಲಾವಣೆ ಮಾಡಲು ಸಮ್ಮತಿ ಕೂಡ ನೀಡಿದೆ.

ಇದ್ರ ಬೆನ್ನಲ್ಲೇ ಸಚಿನ್‌ ಗೆ ಭಾರತ ರತ್ನ ಪ್ರಶಸ್ತಿ ಇಷ್ಟು ಬೇಗ ನೀಡಬಾರದು ಅಂತ ಅಪಸ್ವರದ ಮಾತುಗಳು ಕೇಳಿಬರ್ತಿವೆ. ಸಚಿನ್‌ಗಿಂತ ಮೊದಲು ಧ್ಯಾನ್‌ ಚಾಂದ್‌ಗೆ ಭಾರತ ರತ್ನ ನೀಡಬೇಕು.. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತ್ರದ ದಿನಗಳಲ್ಲಿ ಧ್ಯಾನ್‌ ಚಾಂದ್‌‌ ಹಾಕಿ ಕ್ರೀಡೆಯಲ್ಲಿ ಭಾರತಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್‌ ಪ್ರತಿಭೆ ಇಂದು ನಮ್ಮ ಜತೆ ಇಲ್ಲದಿದ್ರೂ ಅವ್ರ ಆಟದ ನೆನಪು, ಮಾಡಿರುವ ಸಾಧನೆಗಳನ್ನ ಇತಿಹಾಸ ಪುಟಗಳು ಸಾರಿ ಸಾರಿ ಹೇಳ್ತಾವೆ.
ಹಾಗಂತ ಸಚಿನ್‌ಗಿಂತ ಧ್ಯಾನ್‌ಚಾಂದ್‌ ಶ್ರೇಷ್ಠ,.. ಧ್ಯಾನ್‌ಚಾಂದ್‌ಗಿಂತ ಸಚಿನ್‌ ಶ್ರೇಷ್ಠ ಅನ್ನೋದು ಚರ್ಚೆಯ ವಿಷ್ಯವಲ್ಲ. ಸಚಿನ್‌ಗೆ ಇನ್ನೂ 38ರ ಹರೆಯ... ಕ್ರಿಕೆಟ್‌ನಲ್ಲಿ ಸಚಿನ್‌ ಸಾಧಿಸಲು ಇನ್ನೂ ಬೇಕಾದಷ್ಟಿದೆ. ಈ ನಿಟ್ಟಿನಲ್ಲಿ ಧ್ಯಾನ್‌ಚಾಂದ್‌ ನಂತ್ರ ಸಚಿನ್‌ಗೆ ಭಾರತ ರತ್ನ ಪ್ರಶಸ್ತಿ ನೀಡಬಹುದು ಎಂಬುದು ಕೆಲವು ಕ್ರೀಡಾಭಿಮಾನಿಗಳ ವಾದ.. ಆದ್ರೂ ಮತ್ತೆ ಕೆಲವರು ಸಚಿನ್‌ಗೆ ಭಾರತ ರತ್ನನೀಡಬೇಕು ಅನ್ನೋ ಮಾತನ್ನ ಹೇಳುತ್ತಾರೆ.

ಇನ್ನೊಂದೆಡೆ, ಭಾರತದಲ್ಲಿ ಸಚಿನ್‌ಗೆ ಇರುವಷ್ಟು ನೇಮ್‌ - ಫೇಮ್‌ ಧ್ಯಾನ್‌ಚಾಂದ್‌ಗೆ ಖಂಡಿತಾ ಇಲ್ಲ.. ಇದು ನಮ್ಮ ದುರಂತವೋ ಏನೋ.. ಹಾಕಿ ಭಾರತದ ರಾಷ್ಟ್ರೀಯ ಕ್ರೀಡೆ... ಎಂಟು ಬಾರಿ ಒಲಿಂಪಿಕ್‌ ಗೆದ್ದಿರುವ ಹೆಗ್ಗಳಿಕೆ.. ವಿಪರ್ಯಾಸ ಅಂದ್ರೆ ಇಂತಹ ಕ್ರೀಡೆ ಭಾರತದಲ್ಲಿ ಇಂದು ನಶಿಸಿ ಹೋಗ್ತಾ ಇದೆ. ಕಿಂಗ್ ಆಗಿದ್ದ ಭಾರತೀಯ ಹಾಕಿ ಇದೀಗ ಒಲಿಂಪಿಕ್ಸ್‌ ನಲ್ಲಿ ಅರ್ಹತೆ ಪಡೆಯಲು ಪರದಾಡುತ್ತಿದೆ.

ಅಂದ ಹಾಗೇ, ಧ್ಯಾನ್‌ಚಾಂದ್‌ ನಮಗೆಲ್ಲಾ ನೆನಪಾಗೊದು ಆಗಸ್ಟ್‌ 29 ರಂದು ಮಾತ್ರ. ಯಾಕಂದ್ರೆ ಅವತ್ತು ಧ್ಯಾನ್ ಚಾಂದ್‌ ಅವ್ರ ಹುಟ್ಟುಹಬ್ಬ.. ಆ ದಿನವನ್ನ ರಾಷ್ಟ್ರೀಯ ಕ್ರೀಡಾ ದಿನ ಅಂತ ಭಾರತದಲ್ಲಿ ಆಚರಿಸಲಾಗುತ್ತೆ.. ಆದ್ರೆ ಹೆಚ್ಚಿನವರಿಗೆ ಧ್ಯಾನ್‌ಚಾಂದ್‌ ಯಾರು ಅಂತಲೇ ಗೊತ್ತಿಲ್ಲ.. ಕೇವಲ ಹಾಕಿ ಆಡುವವರಿಗೆ ಮಾತ್ರ ಧ್ಯಾನ್‌ಚಾಂದ್‌ ಬಗ್ಗೆ ಅಲ್ಪ ಸ್ವಲ್ಪ ಮಾಹಿತಿ ಇದೆ. ಇದಕ್ಕಾಗಿ ನಾವು ಇಲ್ಲಿ ಯಾರನ್ನ ದೂಷಣೆ ಮಾಡುವಂತಿಲ್ಲ..ಯಾಕಂದ್ರೆ ನಮ್ಮ ವ್ಯವಸ್ಥೆಯೇ ಅಂತಹ ಮಟ್ಟದಲ್ಲಿದೆ. ಆದ್ರೂ ಒಂದು ದಿನವಾದ್ರೂ ಭಾರತೀಯ ಹಾಕಿ ದೇವ್ರನ್ನ ನೆನಪಿಸಿಕೊಳ್ಳುತ್ತೇವೆ ಅನ್ನೋದಷ್ಟೇ ಸಮಾಧಾನ..

ಆದ್ರೆ ಕ್ರಿಕೆಟ್‌ ದೇವ್ರು ಹಾಗಲ್ಲ.. ಪ್ರತಿಯೊಬ್ಬರಿಗೂ ಗೊತ್ತು... ಯಾಕಂದ್ರೆ ಸಚಿನ್‌ ಮಾಡಿರುವ ಮೋಡಿಯೇ ಅಂತಹುದ್ದು. ಜತೆಗೆ ಸಚಿನ್‌ ಸಾಧನೆಗೆ ಕಮರ್ಷಿಯಲ್‌ ಟಚ್‌ ಕೂಡ ಸಿಕ್ತ್‌.. ಗ್ಲಾಮರ್‌ - ಸೆಲೆಬ್ರಿಟಿ, ಕಮರ್ಷಿಯಲ್‌, ಹೀಗೆ ಎಲ್ಲವೂ ಸಚಿನ್ ಆಟಕ್ಕೆ ಮೆರಗನ್ನ ನೀಡಿತ್ತು. ಆದ್ರೆ ಧ್ಯಾನ್‌ಚಾಂದ್‌ ಈ ಎಲ್ಲ ಅವಕಾಶಗಳಿಂದಲೂ ಮರಿಚೀಕೆಯಾಗಿಬಿಟ್ರು...

ಒಟ್ಟಿನಲ್ಲಿ ಭಾರತ ರತ್ನ ಯಾರಿಗೆ ನೀಡಬೇಕು ಅನ್ನೋದೇ ಈಗ ದೊಡ್ಡ ಪ್ರಶ್ನೆಯಾಗಿದೆ. ಸಚಿನ್‌ಗೆ ಮೊದಲು ನೀಡಿದ್ರೆ, ಧ್ಯಾನ್‌ಚಾಂದ್‌ಗೆ ಅವಮಾನ ಮಾಡಿದಂತಾಗುತ್ತೆ.. ಅದೇ ಧ್ಯಾನ್‌ಚಾಂದ್‌ಗೆ ನೀಡಿದ್ರೆ ಸಚಿನ್‌ ಅಭಿಮಾನಿಗಳಿಗೆ ಬೇಸರವಾಗುತ್ತೆ. ಇದ್ರಿಂದ ಪ್ರಶಸ್ತಿಗೆ ಆಯ್ಕೆಮಾಡುವಾಗ ಕೇಂದ್ರ ಸರ್ಕಾರ ಕೂಡ ಎಚ್ಚರಿಕೆಯ ಹೆಜ್ಜೆಯನ್ನಿಡಬೇಕಾಗುತ್ತೆ.
ಅದೇನೇ ಇರಲಿ...ಧ್ಯಾನ್‌ಚಾಂದ್‌ ಮತ್ತು ಸಚಿನ್ ತೆಂಡುಲ್ಕರ್‌ ಭಾರತೀಯ ಕ್ರೀಡಾಲೋಕದ ಅನರ್ಘ್ಯ ರತ್ನಗಳು... ಕ್ರೀಡಾ ಜಗತ್ತಿನಲ್ಲಿ ಇವರಿಬ್ರು ಎಲ್ಲವನ್ನೂ ಪ್ರೂವ್‌ ಮಾಡಿದ್ದಾರೆ... ಇನ್ನೂ ಯಾರಿಗೂ ಪ್ರೂವ್‌ ಮಾಡುವಂತಹ ಅಗತ್ಯವೂ ಇಲ್ಲ...ಭಾರತ ರತ್ನ ಪ್ರಶಸ್ತಿ ಇವ್ರ ಸಾಧನೆಗೆ ಹೆಮ್ಮೆ ಗೌರವ ಮೂಡಿಸುತ್ತೆ..
ಸನತ್ ರೈ

No comments:

Post a Comment