ಸೆಪ್ಟೆಂಬರ್ 11, 1893..
ಚಿಕಾಗೋದಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರೀಯ ಮಟ್ಟದ ಸಭೆ.. ಗದ್ದಲ ತುಂಬಿದ್ದ ಆವರಣದಲ್ಲಿ ಇದ್ದಕ್ಕಿದ್ದಂತೆ ಕಂಚಿನ ಕಂಠವೊಂದರ ಪ್ರತಿಧ್ವನಿ. ಇದ್ದಕ್ಕಿದ್ದಂತೆ ಇಡೀ ಸಭಾಂಗಣವೇ ನಿಶ್ಯಬ್ದ.
ವೇದಿಕೆ ಮೇಲೆ ನಿಂತಿದ್ರು ಆ ಆಜಾನುಬಾಹು, ಮೈ ಡಿಯರ್ ಸಿಸ್ಟರ್ಸ್ ಅಂಡ್ ಬ್ರದರ್ಸ್ ಆಫ್ ಅಮೆರಿಕಾ ಅಂತ ತನ್ನ ಭಾಷಣ ಶುರುಮಾಡಿದ್ದೇ ತಡ ನೆರೆದಿದ್ದ 7 ಸಾವಿರ ಮಂದಿ ಶಿಲೆಗಳಂತೆ ನಿಂತುಬಿಟ್ರು.. ಹಾಗಿತ್ತು ಆ ಆಜಾನುಬಾಹು ಆಡಿದ ಶೈಲಿ.. ಇಡೀ ಜಗತ್ತನ್ನೇ ಮೋಡಿ ಮಾಡಿದ್ದ 3 ನಿಮಿಷಗಳ ಭಾಷಣ ಇತಿಹಾಸವಾಗಿ ಬದಲಾಗಿತ್ತು.
ಆ ಮಹಾನ್ ಮಾನವನೇ ಸ್ವಾಮಿ ವಿವೇಕಾನಂದರು... ಈ ದೈವೀಪುರುಷ ಬದುಕಿದ್ದು ಕೆಲವೇ ವರ್ಷಗಳಾಗಿದ್ರೂ, ತಮ್ಮ ಆದರ್ಶಗಳಿಂದಲೇ ವಿಶ್ವಮಾನವಾಗಿ ಪ್ರಜ್ವಲಿಸಿದ್ರು. ಜನವರಿ 12, 1863ರಲ್ಲಿ ಕೊಲ್ಕತ್ತಾದಲ್ಲಿ ಹುಟ್ಟಿದ್ದ ನರೇಂದ್ರ ನಂತ್ರ ವಿವೇಕಾನಂದರಾಗಿ ಬದಲಾಗಿದ್ದು ಒಂದು ರೋಚಕ ಅಧ್ಯಾಯ.
ವಿವೇಕಾನಂದರು ಅಂದ್ರೆ ಯುವಕರಿಗೆ ಏನೋ ಒಂದು ರೀತಿ ಸ್ಫೂರ್ತಿ.. ಯಾಕಂದ್ರೆ ಅವರ ದೇಶಪ್ರೇಮ, ತಾಯ್ನಾಡ ಮೇಲಿನ ಮಮತೆ, ಸಾಮಾಜಿಕ ಕಾಳಜಿ ಎಲ್ಲವೂ ಅನುಕರಣೀಯ. ಒಬ್ಬ ಮಹಾಮಾನವಾಗಿ, ಭಾರತಾಂಬೆಯ ಸುಪುತ್ರನಾಗಿರುವ ವಿವೇಕಾನಂದರ ಜನ್ಮದಿನವನ್ನ ರಾಷ್ಟ್ರೀಯ ಯುವ ದಿನವನ್ನಾಗಿ ಭಾರತ ಸರ್ಕಾರ 1984ರಲ್ಲಿ ಘೋಷಿಸಿತು. ಹೀಗಾಗಿ ಜನವರಿ 12 ಯುವಕರಿಗೆ ಮಹತ್ವದ ದಿನ.
ಮಾನವತಾವಾದ, ಶಿಕ್ಷಣಕ್ಕೆ ಹೊಸ ಅರ್ಥಕೊಟ್ಟಿದ್ದು ವಿವೇಕಾನಂದರು. ಧರ್ಮ ಅನ್ನೋದು ಕೇವಲ ತಾಯ್ನಾಡಿನ ಪ್ರತಿನಿಧಿಯಾಗಿರಬೇಕು. ನವ ಭಾರತದ ಜ್ಯೋತಿ ಪ್ರಜ್ವಲಿಸಬೇಕಾದ್ರೆ ಯುವಶಕ್ತಿಯ ಬೆವರಿನ ಎಣ್ಣೆ ಹರಿಯಲೇ ಬೇಕು ಅನ್ನೋದನ್ನ ಸಾರಿದ ಮಹಾತ್ಮ ವಿವೇಕಾನಂದರು.
ಯುವಶಕ್ತಿ ಮೇಲೇ ವಿವೇಕಾನಂದರಿಗೆ ಅಪಾರ ನಂಬಿಕೆ. ದೇಶ ಬದಲಾಗಬೇಕು ಅಂದ್ರೆ ಯುವಶಕ್ತಿ ವ್ಯರ್ಥವಾಗದೆ ಒಂದಾಗಿ ದುಡಿಬೇಕು. ಇದ್ರಿಂದಲೇ ಸಾಮಾಜಿಕ ಕ್ರಾಂತಿ ಸಾಧ್ಯ ಅಂತ ವಿವೇಕರು ಹೇಳಿದ್ರು. ಯುವ ರಕ್ತದ ಮೇಲೆ ಅದೆಷ್ಟು ನಂಬಿಕೆ ಅಂದ್ರೆ, ನನಗೆ ಮಹತ್ವಾಂಕ್ಷೆ ಇರುವ 100 ಯುವಕರನ್ನು ಕೊಡಿ, ಹೊಸ ಭಾರತ ಕಟ್ಟುತ್ತೇನೆ ಅಂತ ವಿವೇಕರು ಎದೆಯುಬ್ಬಿಸಿ ಹೇಳಿದ್ರು.
ಆದ್ರೆ ವಿವೇಕಾನಂದರು ಕಂಡಿದ್ದ ನವ್ಯಭಾರತದ ಕನಸು ನನಸಾಗಬಹುದಾ.. ಈ ಪ್ರಶ್ನೆ ಎದುರಾದ್ರೆ ಲೆಕ್ಕವಿಲ್ಲದಷ್ಟು ಜಿಜ್ಞಾಸೆಗಳು ಎದುರಾಗುತ್ತವೆ.. ಆ ಮಹಾಪುರುಷನ ಆಶಯವೇನು..ಹೇಗಿದೆ ಈಗಿನ ಸಮಾಜ.. ಹೇಗಿದ್ದೇವೆ ನಾವು ನೀವುಗಳು.. ಎಲ್ಲಿ ಹೋಯ್ತು ವಿವೇಕಾನಂದರ ಕಲ್ಪನೆಯ ಯುವ ಸಮಾಜ.. ವಿವೇಕಾನಂದರ ಕಲ್ಪನೆಯ ನೇತಾರರಾದ ನಾವು ನೀವುಗಳೇ ಇದಕ್ಕೆ ಉತ್ತರಿಸಬೇಕು..
ಪ್ರಶಾಂತ್ಬಿ.ಆರ್.
Saturday, February 18, 2012
Subscribe to:
Post Comments (Atom)
No comments:
Post a Comment